ಭಾಗ್ಯಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಎಚ್ಚರಿಕೆ: ಮೆಚ್ಯೂರಿಟಿ ಪ್ರಸ್ತಾವನೆ ಸಲ್ಲಿಸಲು ಅಂತಿಮ ಗಡುವು!

By Koushikgk

Published on:

Spread the love
WhatsApp Group Join Now
Telegram Group Join Now
Instagram Group Join Now

bhagyalakshmi scheme — 2006-07ನೇ ಸಾಲಿನ ಭಾಗ್ಯಲಕ್ಷ್ಮೀ ಯೋಜನೆ ಅಡಿಯಲ್ಲಿ ಬಾಂಡ್ ಪಡೆದ ಫಲಾನುಭವಿಗಳ ಮೆಚ್ಯೂರಿಟಿ ಅವಧಿ 2024-25ರಲ್ಲಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ, ಇನ್ನೂ ಪ್ರಸ್ತಾವನೆ ಸಲ್ಲಿಸದವರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೂಚಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಜಾರಿಗೆ ಬಂದಿದ್ದ ಈ ಯೋಜನೆಯಲ್ಲಿ, ವಲಸೆ ಹೋದವರು ಅಥವಾ ವಿಳಾಸ ಪತ್ತೆಯಾಗದ ಫಲಾನುಭವಿಗಳ ಅರ್ಜಿ ಇನ್ನೂ ಆನ್ಲೈನ್ನಲ್ಲಿ ಸಲ್ಲಿಕೆಯಾಗಿ ಇಲ್ಲ.

📢 Stay Updated! Join our WhatsApp Channel Now →

ಸಂಬಂಧಿತ ದಾಖಲೆಗಳೊಂದಿಗೆ ಅಕ್ಟೋಬರ್ 2025 ಅಂತ್ಯದೊಳಗೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಖುದ್ದಾಗಿ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.

ಯೋಜನೆ ಪ್ರಾರಂಭ:

ಹೆಣ್ಣುಮಕ್ಕಳ ಸ್ಥಾನವನ್ನು ಕುಟುಂಬ ಮತ್ತು ಸಮಾಜದಲ್ಲಿ ಹೆಚ್ಚಿಸಲು, ಹಾಗೂ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಲ್ಲಿ ಹೆಣ್ಣುಮಕ್ಕಳ ಜನನವನ್ನು ಉತ್ತೇಜಿಸಲು 2006-07ರಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಪ್ರಾರಂಭಿಸಲಾಯಿತು.

ಯಾರು ಅರ್ಹರು?

  • 31.03.2006 ನಂತರ ಜನಿಸಿದ ಹೆಣ್ಣುಮಕ್ಕಳು.
  • ಬಡತನ ರೇಖೆಗಿಂತ ಕೆಳಗಿನ ಕುಟುಂಬದವರು.
  • ಕುಟುಂಬದಲ್ಲಿ ಗರಿಷ್ಠ 2 ಹೆಣ್ಣುಮಕ್ಕಳಿಗೆ ಮಾತ್ರ.
  • ತಂದೆ/ತಾಯಿ ಶಾಶ್ವತ ಕುಟುಂಬ ಯೋಜನೆ ಅನುಸರಿಸಿರಬೇಕು.
  • ಮಕ್ಕಳ ಸಂಖ್ಯೆ 3ಕ್ಕಿಂತ ಹೆಚ್ಚು ಇರಬಾರದು.
  • 18 ವರ್ಷ ತುಂಬುವವರೆಗೆ ಮದುವೆಯಾಗಬಾರದು.
  • 8ನೇ ತರಗತಿ ಉತ್ತೀರ್ಣವಾಗಿರಬೇಕು.

ಯೋಜನೆಯಡಿ ಸೌಲಭ್ಯಗಳು:

  • ಪ್ರಾರಂಭಿಕ ಠೇವಣಿ: ರೂ.10,000/- (ಹಳೆ ಯೋಜನೆ) ಅಥವಾ ರೂ.19,300/- (ಪರಿಷ್ಕೃತ – ಮೊದಲ ಮಗು), ರೂ.18,350/- (ಎರಡನೇ ಮಗು) ಪಾಲುದಾರ ಬ್ಯಾಂಕ್/ಹಣಕಾಸು ಸಂಸ್ಥೆಯಲ್ಲಿ.
  • ಮೆಚ್ಯೂರಿಟಿ ಮೊತ್ತ: 18 ವರ್ಷ ನಂತರ ಶರತ್ತುಗಳನ್ನು ಪೂರೈಸಿದಲ್ಲಿ ರೂ.34,751/- ರಿಂದ ರೂ.1,00,097/- ವರೆಗೆ.
  • ವಿದ್ಯಾರ್ಥಿ ವೇತನ: ಪ್ರಾಥಮಿಕದಿಂದ 10ನೇ ತರಗತಿವರೆಗೆ ವಾರ್ಷಿಕ ರೂ.300/-ರಿಂದ ರೂ.1000/-ವರೆಗೆ (ಹಳೆಯ ಯೋಜನೆ).
  • ವಿಮೆ ಸೌಲಭ್ಯ:
    • ಸ್ವಾಭಾವಿಕ ಸಾವು: ರೂ.42,500/-
    • ಅಪಘಾತ ಮರಣ: ರೂ.1,00,000/-
    • ಆರೋಗ್ಯ ವಿಮೆ: ಗರಿಷ್ಠ ರೂ.25,000/-

ಪ್ರಮುಖ ನಿಯಮಗಳು:

  • ಜನನ ನೋಂದಣಿ ಕಡ್ಡಾಯ.
  • ರೋಗನಿರೋಧಕ ಲಸಿಕೆ ಹಾಕಿಸಿರಬೇಕು.
  • ಅಂಗನವಾಡಿ/ಶಾಲೆಯಲ್ಲಿ ದಾಖಲಾಗಿರಬೇಕು.
  • ಬಾಲಕಾರ್ಮಿಕಳಾಗಬಾರದು.
  • 18 ವರ್ಷದೊಳಗೆ ಮದುವೆಯಾದರೆ ಅಥವಾ ಮರಣ ಹೊಂದಿದರೆ ಠೇವಣಿ ಸರ್ಕಾರಕ್ಕೆ ವಾಪಸ್.

ಪರಿಷ್ಕರಣೆ (2008):

01.08.2008 ನಂತರ ಜನಿಸಿದ ಮಕ್ಕಳಿಗೆ ಠೇವಣಿ ಮೊತ್ತ ಹಾಗೂ ಮೆಚ್ಯೂರಿಟಿ ಮೊತ್ತ ಹೆಚ್ಚಿಸಲಾಗಿದೆ. 10ನೇ ತರಗತಿ ಉತ್ತೀರ್ಣಳಾಗಿ, ಮುಂದಿನ ವಿದ್ಯಾಭ್ಯಾಸಕ್ಕೆ ಬಾಂಡ್ ಅಡಮಾನವಿಟ್ಟು ಗರಿಷ್ಠ ರೂ.50,000/- ಸಾಲ ಪಡೆಯಲು ಅವಕಾಶ ನೀಡಲಾಗಿದೆ.

ಯೋಜನೆಯ ಸಾಧನೆ (2006-07 ರಿಂದ 2013-14):

  • ಒಟ್ಟು ವೆಚ್ಚ: ರೂ.2908.09 ಕೋಟಿ
  • ಫಲಾನುಭವಿಗಳು: 18,10,176
  • 2013-14ಕ್ಕೆ ಬಾಂಡ್ ವಿತರಣೆಗಾಗಿ ರೂ.396.43 ಕೋಟಿ ಮೀಸಲಾತಿ.

ರಾಜ್ಯ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ‘ಅರಣ್ಯ ವೀಕ್ಷಕ’ ಹುದ್ದೆಗಳ ಶೀಘ್ರ ನೇಮಕಾತಿ – ಅರಣ್ಯ ಸಚಿವ ಈಶ್ವರ್ ಖಂಡ್ರೆ

Leave a Comment