Bele Vime – ಶಿವಮೊಗ್ಗ: ಜಿಲ್ಲೆಯ ರೈತರಿಗೆ ಶುಭವಾರ್ತೆ! ಹವಾಮಾನಾಧಾರಿತ ಬೆಳೆ ವಿಮಾ ಯೋಜನೆಯಡಿ 2025-26 ನೇ ಸಾಲಿನ ಪ್ರಮುಖ ಬೆಳೆಗಳಾದ ಅಡಿಕೆ, ಕಾಳುಮೆಣಸು, ಮಾವು ಮತ್ತು ಶುಂಠಿ ಬೆಳೆಗಳಿಗೆ ವಿಮೆ ನೋಂದಣಿ ಅವಧಿಯನ್ನು ಸರ್ಕಾರ ವಿಸ್ತರಿಸಿದೆ.
ಹಿಂದೆ ಜುಲೈ 31 ರವರೆಗೆ ನಿಗದಿಯಾಗಿದ್ದ ಅವಧಿಯನ್ನು ಇದೀಗ ಸಾಲವಿಲ್ಲದ ರೈತರಿಗೆ ಆಗಸ್ಟ್ 14 ಮತ್ತು ಸಾಲ ಪಡೆದ ರೈತರಿಗೆ ಆಗಸ್ಟ್ 30 ರವರೆಗೆ ವಿಸ್ತರಿಸಲಾಗಿದೆ.
ವಿಮೆ ನೋಂದಣಿಗೆ ಅಗತ್ಯ ದಾಖಲೆಗಳು:
- ಪ್ರಸಕ್ತ ಸಾಲಿನ ಪಹಣಿ (RTC)
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಆಧಾರ್ ಕಾರ್ಡ್
ನೋಂದಣಿ ಮಾಡಲು ಎಲ್ಲಿಗೆ ಹೋಗಬೇಕು?
- ಸಂಬಂಧಿತ ಬ್ಯಾಂಕ್ಗಳು
- ಸಮೀಪದ ಗ್ರಾಮ ಒನ್ ಕೇಂದ್ರಗಳು
- ಸಾರ್ವಜನಿಕ ಸೇವಾ ಕೇಂದ್ರಗಳು (CSC)
ಸಂಪರ್ಕ ಮಾಹಿತಿಗಳು:
- ಶಿವಮೊಗ್ಗ: 08182-279415 / 9900046087
- ಭದ್ರಾವತಿ: 08282-295029 / 9108252536
- ಶಿಕಾರಿಪುರ: 08187-223544 / 8310662972
- ಸೊರಬ: 08184-295112 / 9900046117
- ಸಾಗರ: 08183-295124 / 9449177200
- ತೀರ್ಥಹಳ್ಳಿ: 08181-228151 / 9108280642
- ಹೊಸನಗರ: 08185-295364 / 9591695327
ಯೋಜನೆಯ ಸದುಪಯೋಗ ಪಡೆದುಕೊಳ್ಳಿ:
ಇದು ಒಂದು ಮಹತ್ವದ ಅವಕಾಶ. ಎಲ್ಲಾ ರೈತರು ವಿಮೆ ನೋಂದಣಿ ಅವಧಿ ಲಾಭ ಪಡೆದು, ಬೆಳೆ ವಿಮೆಯ ಸುರಕ್ಷತೆಗೆ ತಮ್ಮ ಹಕ್ಕು ಹೊಂದಿಕೊಳ್ಳಬೇಕು ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
Read More>>ಭೂ ದಾಖಲೆಗಳಲ್ಲಿ ನಕಲಿ ಎಂಟ್ರಿಗಳಿಗೆ ಬ್ರೇಕ್! ರಾಜ್ಯದಲ್ಲಿ ‘ಭೂ ಸುರಕ್ಷಾ ಯೋಜನೆ’ಗೆ ಚಾಲನೆ
“ಮಾಧ್ಯಮ ಒಂದು ಶಕ್ತಿ – ನಿಷ್ಪಕ್ಷಪಾತ ಸುದ್ದಿಯೇ ನಮ್ಮ ಧ್ಯೇಯ” ಎಂಬ ಧೋರಣೆಯೊಂದಿಗೆ, ನಾನು 7 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದೇನೆ. ಸ್ಥಳೀಯ ಸುದ್ದಿಗಳಿಂದ ಅಂತಾರಾಷ್ಟ್ರೀಯ ವಿಷಯಗಳವರೆಗೆ, ನಿಖರವಾದ ವರದಿ ಮತ್ತು ಪ್ರಾಮಾಣಿಕ ಮಾಹಿತಿಯನ್ನೇ ಒದಗಿಸಲು ನಮ್ಮ ಪ್ಲಾಟ್ಫಾರ್ಮ್ ಆರಂಭಿಸಲಾಗಿದೆ.
ಜವಾಬ್ದಾರಿ ಹಾಗೂ ನೈತಿಕತೆ ಪ್ರಧಾನ ಗುರಿಗಳಾಗಿದ್ದು, truth-first journalism ನಮ್ಮ ಧ್ಯೇಯ.
Interests: Investigative Reporting, Rural Journalism, Technology in Media
Quote: “Speak truth, even if your voice shakes.”